ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||
“ನಿನಗೆ ನಿನ್ನ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮಮಾಡದೇ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ತದಿರಲಿ. ಹಾಗೆ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ ಎಂಬುದು ಈ ಶ್ಲೋಕದ ಅರ್ಥ.
ನೀನು ನಿನ್ನ ಕರ್ತವ್ಯ ವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು; ಫಲದ ಚಿಂತೆ ಮಾಡದೆ ಕರ್ತವ್ಯ (ಕರ್ಮ) ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ನಿನ್ನ ಕರ್ತವ್ಯ (ಕರ್ಮ)ವನ್ನು ಮಾಡದೆ ಇರುವ ವಿಚಾರ ನಿನಗೆ ಬಾರದೆ ಇರಲಿ.
ಕಲಿಯುಗದಲ್ಲಿ ಕರ್ಮಫಲಾಪೇಕ್ಷೆಯಿಲ್ಲದೇ ಜೀವಿಸುವವರು ಸಿಗುವುದು ತುಂಬಾ ಕಷ್ಟ. ಆದರೆ ಈ ಫಲಾಪೇಕ್ಷೆಗೂ ಒಂದು ಇತಿ-ಮಿತಿಯನ್ನು ಇಟ್ಟುಕೊಂಡು ಜೀವಿಸಿದರೆ ಮುಕ್ತಿಯ ದಾರಿಯತ್ತ ಸಾಗಬಹುದು. ನಾವು ಒಂದು ಕೆಲಸ ಮಾಡುತ್ತೇವೆಂದಾದರೆ ಅದರಿಂದಾಗುವ ಲಾಭದ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡೇ ಮಾಡುತ್ತೇವೆ. ಆದರೆ ಪರಿಣಾಮ ಲಾಭವೂ ಆಗಬಹುದು, ಕಡಿಮೆ ಲಾಭವಾಗಬಹುದು ಅಥವಾ ನಷ್ಟವೂ ಆಗಬಹುದು. ಈ ಮೂರನ್ನೂ ಸಮನಾದ ಭಾವದಿಂದ ಸ್ವೀಕರಿಸುವ ಗುಣವನ್ನು ನಾವು ಅಳವಡಿಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ. ಪ್ರತಿಫಲಾಪೇಕ್ಷೆಯಿಂದಾಗಿಯೇ ನಾವು ಮಾಡಬೇಕಾದ ಕೆಲಸಗಳಿಂದ ಹಿಂದೆ ಸರಿಯಬಾರದು. ಅಂದರೆ ನನ್ನ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಕುಳಿತುಕೊಳ್ಳಲೇಬಾರದು. ಅಂತಹ ಮನಸ್ಥಿತಿಯು ಎಂದಿಗೂ ಬಾರದಿರಲಿ ಎಂದು ಕೃಷ್ಣ ಹೇಳುತ್ತಾನೆ. ಆದರೆ ‘ನಾನು ಏನನ್ನೂ ಮಾಡುವುದಿಲ್ಲ’ ಎಂದುಕೊಂಡಲ್ಲಿಗೆ ನಮ್ಮ ಬದುಕು ಅಲ್ಲಿಯೇ ನಿಂತುಬಿಡುತ್ತದೆ. ಅರ್ಥಾತ್ ನಾವು ಬದುಕಿದ್ದೂ ಸತ್ತಂತೆ.
ಬುವಿಯಲ್ಲಿ ಪ್ರತಿಯೊಬ್ಬರಿಗೂ ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು ಇದ್ದದ್ದೇ. ಇವೆಲ್ಲವನ್ನೂ ಅನುಭವಿಸುವ ನಮ್ಮ ಮನಸ್ಸು ಇಲ್ಲಿ ಸ್ಥಿರವಾಗಿರಬೇಕು. ಅಂದರೆ ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು. ಯಾಕೆಂದರೆ ಮನುಷ್ಯನ ಜೀವನದಲ್ಲಿ ಎಲ್ಲವೂ ಕ್ಷಣಿಕ. ಏಳುಬೀಳುಗಳನ್ನು ಲೆಕ್ಕಾಚಾರ ಹಾಕುತ್ತ ಅಲ್ಲಿಯೇ ಸ್ಥಿರವಾಗಿಬಿಟ್ಟರೆ ಬದುಕು ಸಾಗುವುದಾದರೂ ಎಂತು? ಹಾಗಾಗಿ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುವುದನ್ನು ಬೆಳೆಸಿಕೊಳ್ಳಬೇಕು. ಪ್ರತಿಫಲವಿಲ್ಲದೇ ಯಾವುದನ್ನೂ ಮಾಡಲಾಗದು ಎಂಬ ಪರಿಸ್ಥಿತಿಯಿದ್ದರೂ ಕೂಡ ಅದರ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆಂಬ ನಿರ್ಧಾರಕ್ಕೆ ಬಂದು ಜೀವಿಸಿದರೆ ಎಲ್ಲವೂ ಆನಂದಮಯವೇ. ಈ ಸಮನಾದ ಭಾವದಿಂದ ಸ್ವೀಕರಿಸುವುದನ್ನೇ ಕೃಷ್ಣನು ಯೋಗ ಎನ್ನುತ್ತಾನೆ. ಈ ಯೋಗದ ಸ್ಥಿತಿಯಲ್ಲಿ ಬದುಕುವಾಗ ನೋವುಗಳೂ ಒಂದೇ; ನಲಿವುಗಳೂ ಒಂದೇ.
ಅಸಲಿಗೆ ಕರ್ಮ ಎಂದರೇನು? ಕರ್ಮ ಎಂಬ ಪದದ ನಿಜವಾದ ಅರ್ಥ ಕೆಲಸ, ಕಾರ್ಯ ಅಥವಾ
ಕ್ರಿಯೆ. ಕರ್ಮ ಎಂಬುದನ್ನು ನಿರ್ಬಂಧಗಳನ್ನು ಹೇರುವ ಕಾನೂನು ಎಂದು ನೋಡುವುದರ ಬದಲಿಗೆ
ಅದು ನಮ್ಮ ಜೀವನವನ್ನು ಉನ್ನತಿಗೆ ಕರೆದುಕೊಂಡು ಹೋಗುವ ಸಾಧನೆ ಎಂದು ನೋಡಿದರೆ
ಒಳ್ಳೆಯದು. ಹೌದು ಕರ್ಮ ಎಂಬುದು ನಿಜವಾದ ಜ್ಞಾನದಿಂದ ಮಾಡುವ ಕ್ರಿಯೆ. ಒಳ್ಳೆಯ ಕರ್ಮ
ಮತ್ತು ಕೆಟ್ಟ ಕರ್ಮಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮಾನವನ
ಜೀವನವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿ, ಒಳ್ಳೆಯ ಕರ್ಮಗಳು ಅವರಿಗೆ ಒಳ್ಳೆಯ
ಫಲಿತಾಂಶಗಳನ್ನು ನೀಡಿರುತ್ತವೆ. ಕೆಟ್ಟ ಕರ್ಮಗಳು ನಕಾರಾತ್ಮಕ ಫಲಿತಾಂಶಗಳನ್ನು
ನೀಡಿರುತ್ತವೆ.
ನೀವು ಪ್ರಪಂಚಕ್ಕೆ ಏನು ನೀಡುತ್ತೀರೋ, ಅದನ್ನೆ ಪಡೆಯುತ್ತೀರಿ. ಅದು ಪ್ರೀತಿ,
ದ್ವೇಷ, ಅಸೂಯೆ, ಕರುಣೆ ಯಾವುದಾದರು ಆಗಿರಬಹುದು, ನೀವು ಯಾವ ಭಾವನೆಯನ್ನು, ಕರ್ಮವನ್ನು
ಜಗತ್ತಿಗೆ ನೀಡುತ್ತೀರೋ, ಅದನ್ನೆ ನೀವು ಪುನಃ ಪಡೆಯುವಿರಿ. ಆದ್ದರಿಂದ ಸಂತೋಷ, ಪ್ರೀತಿ
ಮುಂತಾದ ಸಕಾರಾತ್ಮಕತೆಯನ್ನು ಜಗತ್ತಿಗೆ ನೀಡಿ, ಅದನ್ನೆ ಪಡೆಯಿರಿ.
ಗೀತಾಸಾರ: ಸರಳವಾದ ಬದುಕಿನ ದಾರಿಗಳು ಗೀತೆಯಲ್ಲಿವೆ. ಪ್ರತಿಫಲಾಪೇಕ್ಷೆಯಿಲ್ಲದೆ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನಸ್ಸನ್ನು ಬೆಳೆಸುವ ಕಾರ್ಯ ಆಗಬೇಕು.
**Content: From many sites